ದಿ. 11.01.2026 (ರವಿವಾರ) ಬೆಳಿಗ್ಗೆ 11 ಗಂಟೆಗೆ ಧಾರವಾಡ- ಕ್ಯಾರಕೊಪ್ಪ ರಸ್ತೆಯಲ್ಲಿರುವ ಶ್ರೀ ಭರತೇಶ ಮುಕರೆ ಅವರ ಮಾವಿನ ತೋಟದಲ್ಲಿ ಮಾವು ಅಭಿವೃದ್ಧಿ, ಮಾರಾಟ ಹಾಗೂ ರಫ್ತು ಕುರಿತು ಕ್ಯಾರಕೊಪ್ಪ ಮತ್ತು ಸುತ್ತ ಮುತ್ತಲಿನ ಮಾವು ಬೆಳೆಗಾರರಿಗಾಗಿ ಅರ್ಥಪೂರ್ಣವಾದ ಚಿಂತನ ಗೋಷ್ಠಿ ಹಮ್ಮಿಕೊಳ್ಳಲಾಯಿತು..
ಕಾರ್ಯಕ್ರಮವನ್ನು ಪ್ರಾಯೋಜಿಸಿದ (ಸ್ಥಳಾವಕಾಶ, ಊಟ) ಶ್ರೀ ಭರತೇಶ ಮುಕರೆ, ಸದಸ್ಯರು, ಮಾವು ಬೆಳೆಗಾರರ ಬಳಗ, ಧಾರವಾಡ ಇವರಿಗೆ, ರೈತರ ಕ್ಷೇತ್ರ ಪಾಠಶಾಲೆ(Farmers Field School) ನಡೆಸಿ ಕೊಟ್ಟ ಡಾ. ಜೆ. ಬಿ. ಗೋಪಾಲಿ ಇವರಿಗೆ, ರಾಜೇಂದ್ರ ತೇಲಿ ಇವರಿಗೆ ಹಾಗೂ ಭಾಗವಹಿಸಿದ್ದ ಸುಮಾರು 50 ಜನ ರೈತರಿಗೆ ಅನಂತ ಧನ್ಯವಾದಗಳು.





